ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಬಹಳ ಕಾಲದಿಂದ ರಾಜಕೀಯದಲ್ಲಿ ಸಕ್ರಿಯವಾಗಿದ್ದಾರೆ. ಅವರು ಮಾಡಿದರೆಂದು ಇವರೂ ಮಾಡಲು ಹೊರಟರೆ ಸರಿಹೋಗುತ್ತದೆಯೇ? ಶ್ರೀಗಳು ಇಂತಹ ಯೋಚನೆಗಳನ್ನು ಬದಿಗೊತ್ತಿ, ಭಕ್ತಜನರ ಅಶೋತ್ತರಗಳಿಗೆ ಸ್ಪಂದಿಸುವ ಕಾರ್ಯ ಮಾಡಲಿ. ಅಥವಾ ಕಾಷಾಯ ವಸ್ತ್ರವನ್ನು ತೊರೆದು ಪೂರ್ಣ ಪ್ರಮಾಣದಲ್ಲಿ ರಾಜಕೀಯಕ್ಕೆ ಪ್ರವೇಶಿಸಲಿ.