ಚಿಕ್ಕೋಡಿ–ಸದಲಗಾ ವಿಧಾನಸಭಾ ಕ್ಷೇತ್ರದಲ್ಲಿ ಮಂಗಳವಾರ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ, ಸಚಿವರು ಮಾತನಾಡುತ್ತಿದ್ದರು. ರಾಜ್ಯದಲ್ಲಿ ರಸ್ತೆಗಳು ಅಭಿವೃದ್ಧಿಯಾಗಿವೆ ಎಂದು ಹೇಳುವ ಸಂದರ್ಭದಲ್ಲಿ ಅವರು ಆಡಿದ ಈ ಮಾತು ಸಭಿಕರ ಚಪ್ಪಾಳೆ, ಶಿಳ್ಳೆಯನ್ನು ಪಡೆಯಿತು. ಜೊತೆಗೆ, ಈ ಹೇಳಿಕೆಯ ಔಚಿತ್ಯದ ಬಗ್ಗೆ ಸಭಿಕರು ಅಲ್ಲಲ್ಲಿ ಚರ್ಚಿಸಿದ್ದೂ ಕೇಳಿ ಬಂತು.