ಅರಣ್ಯ ಭೂಮಿ ಹಕ್ಕುಗಳ ವರ್ಗಾವಣೆ ಬಗ್ಗೆ ರೈತರು ಇಟ್ಟಿರುವ ಬೇಡಿಕೆಗಳ ಕುರಿತು ಮಾತನಾಡಿದ ಫಡಣವೀಸ್, ‘ಈ ಬಗ್ಗೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲು ಆರು ತಿಂಗಳ ಕಾಲಾವಕಾಶ ಬೇಕಾಗಿದೆ. ಬುಲೆಟ್ ಟ್ರೇನ್ ಹಾಗೂ ಸಮೃದ್ಧಿ ಮಹಾಮಾರ್ಗ (ಮುಂಬೈ ಮತ್ತು ನಾಗಪುರವನ್ನು ಸಂಪರ್ಕಿಸುವ ಮಾರ್ಗ) ಯೋಜನೆಗಳಿಗೆ ಭೂ ಒತ್ತುವರಿ ಮಾಡುವ ಸಂದರ್ಭದಲ್ಲಿ ರೈತರ ಜೊತೆ ಸಮಾಲೋಚಿಸಿಯೇ ತೀರ್ಮಾನ ತೆಗೆದುಕೊಳ್ಳಲಾಗುವುದು’ ಎಂದಿದ್ದಾರೆ.