ನಾಯಕನ ವೈಫಲ್ಯ: ಆತಂಕ: ಹಂಗಾಮಿ ನಾಯಕ ರೋಹಿತ್ ಶರ್ಮಾ ನಿರಂತರ ಮೂರನೇ ಪಂದ್ಯದಲ್ಲೂ ವೈಫಲ್ಯ ಕಂಡಿರುವುದು ಭಾರತದ ಆತಂಕಕ್ಕೆ ಕಾರಣವಾಗಿದೆ. ಸುರೇಶ್ ರೈನಾ ಕೂಡ ನಿರೀಕ್ಷೆಗೆ ತಕ್ಕಂತೆ ಆಡಿಲ್ಲ. ಶಿಖರ್ ಧವನ್ ಮತ್ತು ಮನೀಷ್ ಪಾಂಡೆ ಉತ್ತಮ ಲಯದಲ್ಲಿರುವುದು ಮತ್ತು ಕಳೆದ ಪಂದ್ಯದಲ್ಲಿ ದಿನೇಶ್ ಕಾರ್ತಿಕ್ ಮಿಂಚಿರುವುದು ಭಾರತ ಪಾಳಯದಲ್ಲಿ ಭರವಸೆ ಮೂಡಿಸಿದೆ.