ಹುಬ್ಬಳ್ಳಿ: ಹಣಕ್ಕಾಗಿ ಯುವಕನೊಬ್ಬ ಸಂಬಂಧಿ ವೈದ್ಯರನ್ನು ಹತ್ಯೆಮಾಡಿದ್ದಾನೆ. ನಗರದ ಪ್ರತಿಷ್ಠಿತ ಶುಶ್ರುತ ನರ್ಸಿಂಗ್ ಹೋಮ್ ನಿರ್ದೇಶಕ ಡಾ. ಬಾಬು ಹುಂಡೇಕರ ಹತ್ಯೆಯಾದವರು.
ಬಾಬು ಅವರು ಕೊಟ್ಟ ಹಣವನ್ನು ಮರಳಿ ಕೇಳಿದಕ್ಕೆ ಹತ್ಯೆ ಮಾಡಿರಬಹುದು ಎಂದು ವಿದ್ಯಾನಗರ ಪೊಲೀಸರು ಶಂಕಿಸಿದ್ದು, ಪ್ರಕರಣ ಸಂಬಂಧ ನವೀನ್ ಮುಲ್ಕಿಗೌಡರ್ ಸೇರಿ ಇತರೆ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಎರಡು ದಿನದ ಹಿಂದೆ ಊರಿನಿಂದ ಹೊರಗಡೆ ಹೋಗುತ್ತಿರುವುದಾಗಿ ಸ್ನೇಹಿತರಿಗೆ ವಾಟ್ಸ್ ಆ್ಯಪ್ ಸಂದೇಶ ರವಾನಿಸಿದ್ದ ಡಾ.ಬಾಬು ಹುಂಡೇಕರ ಅವರು ಇತ್ತೀಚೆಗೆ ಪ್ರತ್ಯೇಕವಾಗಿ ‘ಶಿವ ಶಕ್ತಿ’ ನರ್ಸಿಂಗ್ ಹೋಮ್ ಆರಂಭಿಸಿದ್ದರು.