ಮಂಗಳವಾರ ಬೆಳಿಗ್ಗೆ ಪಟ್ಟಣ ಪಂಚಾಯಿತಿಯ ಮಿನಿ ಟ್ಯಾಂಕರ್ ಮೂಲಕ ಗುಡ್ಡದ ಇಳಿಜಾರು ತಲುಪಿ ಅಳಿದುಳಿದ ಬೆಂಕಿ ಕೆಂಡಗಳಿಗೂ ನೀರು ಹಾಯಿಸಿ ನಂದಿಸಲಾಯಿತು. ಅರಣ್ಯ ಇಲಾಖೆ ಹಾಗೂ ಕೊಪ್ಪ, ಮತ್ತು ಶೃಂಗೇರಿ ಅಗ್ನಿಶಾಮಕ ಕೇಂದ್ರಗಳ 60ಕ್ಕೂ ಹೆಚ್ಚು ಸಿಬ್ಬಂದಿ ಹರಸಾಹಸಪಟ್ಟು ಸಂಪೂರ್ಣ ಬೆಂಕಿ ನಂದಿಸಿದರಲ್ಲದೆ ಪಕ್ಕದ ಕಾಡಿಗೆ ಬೆಂಕಿ ಹರಡದಂತೆಯೂ ಮುನ್ನೆಚ್ಚರಿಕೆ ಕ್ರಮವಹಿಸಿದರು.