‘ಮೈಸೂರು ಭಾಗದ 8 ಜಿಲ್ಲೆಗಳಲ್ಲಿ ನಮ್ಮ ಸಮುದಾಯಕ್ಕೆ ಅನ್ಯಾಯವಾಗಿದೆ. ಮೈಸೂರಿನಲ್ಲಿ 3.5 ಲಕ್ಷ, ಚಾಮರಾಜನಗರದಲ್ಲಿ 2.1 ಲಕ್ಷ, ಮಂಡ್ಯ ಜಿಲ್ಲೆಯಲ್ಲಿ 1.6 ಲಕ್ಷ, ಹಾಸನದಲ್ಲಿ 2.3 ಲಕ್ಷ, ಚಿಕ್ಕಮಗಳೂರಿನಲ್ಲಿ 2 ಲಕ್ಷ, ಕೊಡಗಿನಲ್ಲಿ 50 ಸಾವಿರ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ 60 ಸಾವಿರ ಮತದಾರರಿದ್ದಾರೆ. ಇಷ್ಟು ಸಂಖ್ಯೆ ಇದ್ದರೂ ನಾವು ಟಿಕೆಟ್ ಕೊಡಿ ಎಂದು ಅಂಗಲಾಚಬೇಕಾಗಿದೆ’ ಎಂದು ಕಿಡಿಕಾರಿದರು.