‘ನಮ್ಮದು ಬಹುಸಂಸ್ಕೃತಿಯ ದೇಶ. ಪ್ರತಿ ರಾಜ್ಯ ತನ್ನದೇ ಆದ ಭಾಷೆ, ಆಚಾರ ಹಾಗೂ ವಿಚಾರ ಹೊಂದಿದೆ. ಇದನ್ನು ಉಳಿಸಿ ಬೆಳೆಸುವುದು ಸಂವಿಧಾನದ ಆಶಯ. ಆದರೆ, ಬಿಜೆಪಿ ನಾಯಕರು ಏಕಭಾಷೆ, ಏಕಧರ್ಮ ಪ್ರತಿಪಾದಿಸಿ ಸಂವಿಧಾನಕ್ಕೆ ವಿರುದ್ಧವಾಗಿ ನಡೆಯುತ್ತಿದ್ದಾರೆ. ಪ್ರಧಾನಿ ಮೋದಿ ಸೇರಿ ಆ ಪಕ್ಷದ ಹಲವು ನಾಯಕರ ಬಾಯಲ್ಲಿ ಸಂವಿಧಾನ ಬದಲಿಸುವ ಮಾತು ಬರುತ್ತಿವೆ. ದೇಶ ಮುನ್ನಡೆಸಲು ಇವರು ಯೋಗ್ಯರಲ್ಲ. ಸಂವಿಧಾನ ಗೌರವಿಸುವ ಪ್ರತಿ ಪ್ರಜೆಯೂ ಬಿಜೆಪಿ ಸೋಲಿಸುವ ಸಂಕಲ್ಪ ಮಾಡಬೇಕು’ ಎಂದರು.