‘ಕಾಲೊನಿಯ ನಿರ್ಮಾಣದ ವೇಳೆ ಬಿಡಿಎ ರಾಜಕಾಲುವೆಯನ್ನು ನಿರ್ಮಿಸಿತ್ತು. ಬಡಾವಣೆ ಬೆಳೆದಂತೆ ಅದಕ್ಕೆ ತಕ್ಕಂತಹ ಒಳಚರಂಡಿ ಕಾಲುವೆಗಳನ್ನು ನಿರ್ಮಿಸಲಿಲ್ಲ. ಜಲಮಂಡಳಿಯು ಕೊಳಚೆನೀರನ್ನು ಈ ಕಾಲುವೆಗೆ ಹರಿಸುತ್ತಿದೆ. ಈ ಕೊಳಕು ನೀರು ಮಡಿವಾಳ ಕೆರೆಯನ್ನು ಸೇರುತ್ತಿದೆ. ಇದರಿಂದ ಕೆರೆಯೂ ಕಲುಷಿತಗೊಂಡಿದೆ’ ಎಂದು ಸ್ಥಳೀಯ ನಿವಾಸಿ ಎ. ಗುಂಡಾ ಭಟ್ ದೂರಿದರು.