ರಣಜಿ ಟೂರ್ನಿಯ ಪ್ರಶಸ್ತಿ ಗೆದ್ದಿದ್ದ ವಿದರ್ಭ ಇಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆರಿಸಿಕೊಂಡಿತು. ವೇಗಿ ನವದೀಪ್ ಸೈನಿ, ಆಫ್ ಸ್ಪಿನ್ನರ್ಗಳಾದ ರವಿಚಂದ್ರನ್ ಅಶ್ವಿನ್ ಮತ್ತು ಜಯಂತ್ ಯಾದವ್ ನೇತೃತ್ವದ ದಾಳಿಗೆ ದಿಟ್ಟ ಉತ್ತರ ನೀಡಿದ ಆತಿಥೇಯ ತಂಡದ ಬ್ಯಾಟ್ಸ್ಮನ್ಗಳು ಆರಂಭದಲ್ಲೇ ಆಧಿಪತ್ಯ ಸ್ಥಾಪಿಸಿದರು. ನಾಯಕ ಫಯಾಜ್ ಫಜಲ್ (89; 190ಎ, 1 ಸಿ, 6 ಬೌಂ) ಮತ್ತು ಸಂಜಯ್ ರಾಮಸ್ವಾಮಿ (53; 111ಎ, 1 ಸಿ, 6 ಬೌಂ) ಮೊದಲ ವಿಕೆಟ್ಗೆ ಶತಕದ ಜೊತೆಯಾಟ ಆಡಿದರು. 101 ರನ್ ಗಳಿಸಿದ ಇವರಿಬ್ಬರ ಜೊತೆಯಾಟ ಮುರಿಯಲು ಭಾರತ ಇತರೆ ತಂಡ 35ನೇ ಓವರ್ ವರೆಗೆ ಕಾಯಬೇಕಾಯಿತು.