ಘಟನೆ ಸಂಬಂಧ ತಹಶೀಲ್ದಾರ್ ಆರ್.ಶೋಬಿತಾ ಅವರ ಆದೇಶದಂತೆ ಹನುಮಂತಪ್ಪ ದೂರು ಕೊಟ್ಟಿದ್ದಾರೆ. ಆ ದೂರು ಆಧರಿಸಿ ಮಾರಪ್ಪರ ವಿರುದ್ಧ ಸರ್ಕಾರಿ ನೌಕರರ ಕೆಲಸಕ್ಕೆ ಅಡ್ಡಿ, ಹಲ್ಲೆ ಯತ್ನ ಹಾಗೂ ಅತಿಕ್ರಮ ಪ್ರವೇಶ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ. ಮಾರಪ್ಪ ತಲೆಮರೆಸಿಕೊಂಡಿದ್ದು, ಪತ್ತೆ ಕಾರ್ಯ ಮುಂದುವರಿದಿದೆ ಎಂದು ಪೊಲಿಸರು ತಿಳಿಸಿದ್ದಾರೆ.