ಸೋಮವಾರದಿಂದ ಆರಂಭವಾಗಿರುವ ಉಪನಗರ ರೈಲು ಸೇವೆ ಇಂತಹದೊಂದು ಅವಕಾಶವನ್ನು ನಗರದ ಜನತೆಗೆ ಒದಗಿಸಿದೆ. ಹೀಲಳಿಗೆವರೆಗೆ ರೈಲಿನಲ್ಲಿ, ನಂತರ ಕ್ಯಾಬ್ನಲ್ಲಿ ಪ್ರಯಾಣ ಮಾಡುವ ಮೂಲಕ ಹೊರವರ್ತುಲ ರಸ್ತೆ, ಸಿಲ್ಕ್ ಬೋರ್ಡ್ ಜಂಕ್ಷನ್ ಹಾಗೂ ಹೊಸೂರು ರಸ್ತೆ ಜಂಕ್ಷನ್ನಲ್ಲಿ ಸಂಚಾರ ದಟ್ಟಣೆಯಲ್ಲಿ ಸಿಲುಕುವುದನ್ನು ತಪ್ಪಿಸಬಹುದು.