ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿಯು ಮನೆ ಕಟ್ಟಿಕೊಡಲು ಸೀಮಿತವಾಗಿದೆ. ಆದರೆ, ನಿವಾಸಿಗಳು ಘನತೆಯಿಂದ ಜೀವನ ನಡೆಸಲು ಹಾಗೂ ಸಾಮಾಜಿಕ ನ್ಯಾಯದ ಹಕ್ಕುಗಳನ್ನು ಎತ್ತಿ ಹಿಡಿಯುವಲ್ಲಿ ವಿಫಲವಾಗಿದೆ. ವಸತಿ, ಆರೋಗ್ಯ, ಭೂಮಿ ಹಕ್ಕು ಹಾಗೂ ಮಕ್ಕಳಿಗೆ ಶಾಲೆ, ಆಟದ ಮೈದಾನ ಒದಗಿಸಲು ಸಾಧ್ಯವಾಗಿಲ್ಲ ಎಂದು ದೂರಿದರು.