ಮೀನುಗಾರಿಕೆ ಇಲಾಖೆಯ ಉಪನಿರ್ದೇಶಕ ಸಂತೋಷ ಕೊಪ್ಪದ್ ಮಾತನಾಡಿ, ‘ಜಿಲ್ಲೆಯ ಮೀನುಗಾರರಿಗೆ ಆಳ ಸಮುದ್ರದ ಮೀನುಗಾರಿಕೆ ನಡೆಸಬಾರದು ಎಂದು ಮಾತ್ರ ಇಲಾಖೆ ಮುನ್ಸೂಚನೆ ನೀಡಿದೆ. ಉಳಿದಂತೆ ತಮಿಳುನಾಡು ಮೂಲದ ಸುಮಾರು 50ಕ್ಕಿಂತ ಹೆಚ್ಚಿನ ಬೋಟುಗಳು ಇಲ್ಲಿನ ಬಂದರು ಹಾಗೂ ಟ್ಯಾಗೋರ್ ಕಡಲತೀರಗಳಲ್ಲಿ ಲಂಗರು ಹಾಕಿವೆ. ಹೆಚ್ಚೆಂದರೆ ಎರಡು ದಿನಗಳವರೆಗೆ ಅವು ಇಲ್ಲಿದ್ದು, ವಾತಾವರಣ ಸರಿಯಾಗುತ್ತಿದ್ದಂತೆ ವಾಪಾಸ್ಸಾಗಲಿದೆ’ ಎಂದರು.