‘ಲ್ಯಾಟರಲ್ ಎಂಟ್ರಿ ಪದ್ಧತಿಯನ್ನು ಹಿಂದಿನಿಂದಲೂ ಅನುಸರಿಸಿಕೊಂಡು ಬರಲಾಗಿದೆ. ಕಾಲಕಾಲಕ್ಕೆ ನಿರ್ದಿಷ್ಟ ಕೆಲಸಗಳಿಗಾಗಿ ಕೆಲವು ಪ್ರಮುಖ ವ್ಯಕ್ತಿಗಳನ್ನು ನೇಮಕ ಮಾಡಲಾಗಿದೆ. ಮನಮೋಹನ್ ಸಿಂಗ್, ಮಾಂಟೆಕ್ ಸಿಂಗ್ ಅಹ್ಲುವಾಲಿಯಾ ಅವರು ಸೇರಿದಂತೆ ವಿಜಯ್ ಕೇಳ್ಕರ್, ಬಿಮಲ್ ಜಲಾನ್, ಶಂಕರ್ ಆಚಾರ್ಯ, ರಾಕೇಶ್ ಮೋಹನ್, ಅರವಿಂದ್ ವೀರಮಣಿ, ಅರವಿಂದ್ ಪನಾಗರಿಯಾ, ಅರವಿಂದ್ ಸುಬ್ರಮಣಿಯನ್, ವಿದ್ಯಾ ರಾಜೇಶ್ ಕೋಟೆಕಾ, ಪರಮೇಶ್ವರನ್ ಅಯ್ಯರ್ ಮತ್ತು ರಾಮ್ ವಿನಯ್ ಸಾಹಿ ಅವರನ್ನು ಉನ್ನತ ಹುದ್ದೆಗಳಿಗೆ ನೇಮಕ ಮಾಡಲಾಗಿತ್ತು’ ಎಂದು ತಿಳಿಸಿದರು.