ಯಾದಗಿರಿ: ‘ಅರಕೇರಾ (ಕೆ) ಗ್ರಾಮದಲ್ಲಿ ಕುಡಿಯುವ ನೀರಿನ ಅಭಾವ, ಅಂಗನವಾಡಿ ಅವ್ಯವಸ್ಥೆ, ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ಕೊರತೆ.. ಹೀಗೆ ನೂರಾರು ಸಮಸ್ಯೆಗಳಿದ್ದು, ಇನ್ನು ತಿಂಗಳ ಅವಧಿಯಲ್ಲಿ ಸಮಸ್ಯೆಗಳಿಗೆ ಪರಿಹಾರ ಒದಗಿಸದಿದ್ದರೆ ಜಿಲ್ಲಾ ಪಂಚಾ ಯಿತಿಗೆ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಲಾಗುವುದು ಎಂದು ಜೆಡಿಎಸ್ ಜಿಲ್ಲಾ ಕಾರ್ಮಿಕ ವಿಭಾಗದ ಅಧ್ಯಕ್ಷ ಭೀಮರಾಯ ಭಂಡಾರಿ ಎಚ್ಚರಿಕೆ ನೀಡಿದರು.