‘ನಾರಾಯಣಾಚಾರ್ಯ ಅವರು, ರಾಮಾಯಣ, ಮಹಾಭಾರತ ಹಾಗೂ ಭಾಗವತ ಆಧಾರಿತ ಕಥಾನಕಗಳು, ರಾಷ್ಟ್ರೀಯತೆ ಮತ್ತು ರಾಜಕೀಯ ವಿಶ್ಲೇಷಣಾತ್ಮಕ ಬರಹಗಳು ಸೇರಿದಂತೆ 90ರಿಂದ 95 ಪುಸ್ತಕಗಳನ್ನು ಬರೆದಿದ್ದಾರೆ. ಆ ಎಲ್ಲ ಪುಸ್ತಕಗಳ ಒಟ್ಟು ಮೌಲ್ಯ ₹20,000ಕ್ಕಿಂತ ಹೆಚ್ಚಾಗುತ್ತದೆ. ಈ ನಿಟ್ಟಿನಿಂದ ₹20,000 ನೀಡಿ ಎಲ್ಲ ಪುಸ್ತಕ ಖರೀದಿಸಿದವರಿಗೆ, ₹8,000 ಮೌಲ್ಯದ ಕಪಾಟನ್ನೂ ಉಚಿತವಾಗಿ ನೀಡುತ್ತಿದ್ದೇವೆ’ ಎಂದು ಸಾಹಿತ್ಯ ಪ್ರಕಾಶನದ ಎಂ.ಎ. ಸುಬ್ರಹ್ಮಣ್ಯ ಹೇಳಿದರು.