ಮಂಗಳೂರು: ರಾಜ್ಯದಲ್ಲಿ ಚುನಾವಣೆ ಸಮೀಪಿಸುತ್ತಿದ್ದು, ಈ ಸಂದರ್ಭದಲ್ಲಿ ಹಣದ ಪ್ರಭಾವವನ್ನು ತಡೆಗಟ್ಟಲು ಆದಾಯ ತೆರಿಗೆ ಇಲಾಖೆಯ ತನಿಖಾ ವಿಭಾಗದ ವತಿಯಿಂದ ರಾಜ್ಯದ ಪ್ರತಿ ಜಿಲ್ಲೆಯಲ್ಲಿಯೂ ಪ್ರತ್ಯೇಕ ತಂಡವನ್ನು ರಚಿಸಲಾಗುವುದು ಎಂದು ಇಲಾಖೆಯ ಕರ್ನಾಟಕ, ಗೋವಾ ವಿಭಾಗದ ಪ್ರಧಾನ ನಿರ್ದೇಶಕ (ತನಿಖಾ ವಿಭಾಗ) ಬಿ.ಆರ್.ಬಾಲಕೃಷ್ಣನ್ ತಿಳಿಸಿದರು.