ತಾಲ್ಲೂಕು ಪಂಚಾಯಿತಿ ಸದಸ್ಯೆ ಶೋಭಾ ತಿಮ್ಮೇಗೌಡ, ‘ಅರ್ಚಕರ ಬಡಾವಣೆ, ಚೌಡೇಶ್ವರಿ ನಗರದಲ್ಲಿ ಕೇವಲ 280 ಪಡಿತರ ಚೀಟಿಗಳಿವೆ. ಇಲ್ಲಿಗೆ ನ್ಯಾಯಬೆಲೆ ಅಂಗಡಿ ಮಂಜೂರು ಮಾಡಲು ಸಾಧ್ಯವಿಲ್ಲ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಆಯುಕ್ತರು ಮನವಿ ತಿರಸ್ಕರಿಸಿದ್ದರು. ಆದರೆ, ಹೊಸಬೈರೋಹಳ್ಳಿ, ಹಳೆಬೈರೋಹಳ್ಳಿ ಸೇರಿಸಿ ಅಂಗಡಿ ಮಂಜೂರು ಮಾಡಿ ಎಂದು ಶಾಸಕರು ಒತ್ತಾಯ ಮಾಡಿದ್ದರು’ ಎಂದು ಹೇಳಿದರು.