ದುದ್ದ ಜಿ.ಜೆ.ಸಿ. ಶಿಕ್ಷಕಿ ಬಿ.ಎಸ್. ವನಜಾಕ್ಷಿ ಮಾತನಾಡಿ, ಮನೆಯೇ ಮೊದಲ ಶಾಲೆ, ಜನನಿ ತಾನೆ ಮೊದಲ ಗುರು. ಜನನಿಯಿಂದ ಪಾಠ ಕಲಿತ ಜನರು ಧನ್ಯರು. ವಿವೇಕಾನಂದ, ಪರಮಹಂಸ, ಗಾಂಧಿ ಎಲ್ಲರೂ ತಾಯಿಯ ಪ್ರಭಾವದಿಂದ ಬೆಳೆದು ಸಾಧಕರಾದವರು. ಮಹಿಳಾ ಕ್ಷೇತ್ರದಲ್ಲಿ ಕಿರಣ್ ಬೇಡಿ, ಕಲ್ಪನಾಚಾವ್ಲಾ, ಮೇರಿಕೋಮ್ ಸಾಧನೆ ಪುರುಷರಿಗೂ ಕಡಿಮೆಯಲ್ಲ. ಆದ್ದರಿಂದ ಮಹಿಳೆ ಮತ್ತು ಪುರುಷ ಒಂದು ನಾಣ್ಯದ ಎರಡು ಮುಖಗಳಿದ್ದಂತೆ. ಮಹಿಳೆಗೆ ನೈತಿಕ ಬೆಂಬಲ ನೀಡಬೇಕೆಂದು ತಿಳಿಸಿದರು.