ಇಲ್ಲಿನ ಎಂಜಿನಿಯರುಗಳ ಸಂಘದ ಸದಸ್ಯರು ವೀರಶೈವ ರುದ್ರಭೂಮಿಯಲ್ಲಿ ಸದ್ದಿಲ್ಲದೆ ಗುಡಿ ನಿರ್ಮಾಣದ ಕೆಲಸದಲ್ಲಿ ತೊಡಗಿದ್ದಾರೆ. ಅದರೊಂದಿಗೆ ರುದ್ರಭೂಮಿ ಅಭಿವೃದ್ಧಿಗೂ ಆದ್ಯತೆ ನೀಡಿದ್ದಾರೆ. ಈಗಾಗಲೇ ರುದ್ರಭೂಮಿಯನ್ನು ಸ್ವಚ್ಛಗೊಳಿಸಿ ನೀರಿನ ತೊಟ್ಟಿ ಹಾಗೂ ರಸ್ತೆ ನಿರ್ಮಾಣ ಮಾಡಲಾಗಿದೆ. ಕೊಳವೆ ಬಾವಿ ಕೊರೆಸಿ ಆರಣ್ಯ ಇಲಾಖೆ ಸಹಕಾರದಲ್ಲಿ 230 ಸಸಿಗಳನ್ನು ನೆಡಲಾಗಿದೆ. ಅವುಗಳ ರಕ್ಷಣೆ ಸಲುವಾಗಿಯೇ ₹ 37 ಸಾವಿರ ವೆಚ್ಚದಲ್ಲಿ ಗೇಟ್ ಅಳವಡಿಸಲಾಗಿದೆ. ₹ 23 ಸಾವಿರ ವೆಚ್ಚದಲ್ಲಿ ಕಂಪೌಂಡ್ ಹಾಗೂ ಕಟ್ಟಡಗಳಿಗೆ ಬಣ್ಣ ಬಳಿಯಲಾಗಿದೆ.