‘ಇರ್ಫಾನ್ ಒಬ್ಬ ಯೋಧ. ಸಮಸ್ಯೆಗಳ ವಿರುದ್ಧ ಹೋರಾಡಿ ಗೆಲ್ಲುವುದು ಯೋಧನ ಲಕ್ಷಣ. ಇರ್ಫಾನ್ ಕೂಡಾ ತಮ್ಮ ಕಾಯಿಲೆ ಜೊತೆಗಿನ ಹೋರಾಟದಲ್ಲಿ ಗೆದ್ದುಬರುತ್ತಾರೆ. ಅದಕ್ಕಾಗಿ ನಾನು ಕಾಯುತ್ತೇನೆ. ಅವರು ಬಂದ ಮೇಲೆಯೇ ಚಿತ್ರೀಕರಣ ಶುರು ಮಾಡುತ್ತೇನೆ. ಚಿತ್ರದ ನಾಯಕಿ ದೀಪಿಕಾ, ಸಹನಿರ್ಮಾಪಕಿ ಪ್ರೇರಣಾ ಅರೋರಾ ಅವರೊಂದಿಗೆ ನಾನು ಈ ತೀರ್ಮಾನ ಕೈಗೊಂಡಿದ್ದೇನೆ’ ಎಂದು ಭಾರದ್ವಾಜ್ ಮಾರ್ಮಿಕವಾಗಿ ಟ್ವೀಟ್ ಮಾಡಿದ್ದಾರೆ.