ಮದುವೆ ವೇಳೆ ₹ 50 ಸಾವಿರ ಹಾಗೂ 250 ಗ್ರಾಂ ಚಿನ್ನದ ಒಡವೆಯನ್ನು ವರದಕ್ಷಿಣೆ ರೂಪದಲ್ಲಿ ನೀಡಲಾಗಿತ್ತು. ಆದರೂ, ವರದಕ್ಷಿಣೆಗಾಗಿ ಪತಿ ಕುಟುಂಬಸ್ಥರು ಕಿರುಕುಳ ನೀಡುತ್ತಿದ್ದರು. ಅದಕ್ಕೆ ನಿರಾಕರಿಸಿದ್ದರಿಂದ ಮಗಳನ್ನು ನೇಣು ಹಾಕಿ ಕೊಲೆ ಮಾಡಿದ್ದಾರೆ ಎಂದು ಆರೋಪಿಸಿ ಗಂಗೋತ್ರಿ ತಂದೆ ತಿಪ್ಪಾರೆಡ್ಡಿ ದೂರು ಕೊಟ್ಟಿದ್ದಾರೆ.