ನವದೆಹಲಿ: 2014ರಲ್ಲಿ ಇರಾಕಿನ ಮೊಸುಲ್ನಲ್ಲಿ ನಾಪತ್ತೆಯಾಗಿದ್ದ 39 ಭಾರತೀಯರು ಹತ್ಯೆಯಾಗಿದ್ದಾರೆ ಎಂದು ವಿದೇಶಾಂಗ ಮತ್ತು ವ್ಯವಹಾರ ಸಚಿವೆ ಸುಷ್ಮಾ ಸ್ವರಾಜ್ ಅವರು ಸ್ಪಷ್ಟಪಡಿಸಿದ್ದಾರೆ.
ರಾಜ್ಯಸಭೆಯಲ್ಲಿ ಭಯೋತ್ಪಾದಕ ಕೃತ್ಯದ ಬಗ್ಗೆ ಮಾತನಾಡುವಾಗ 39 ಭಾರತೀಯರ ಹತ್ಯೆಯ ಬಗ್ಗೆ ತಿಳಿಸಿದ್ದಾರೆ.
39 ಭಾರತೀಯರ ಹತ್ಯೆಯ ಬಗ್ಗೆ ಸರಿಯಾದ ಪುರಾವೆ ಹಾಗೂ ಸಾಕ್ಷ್ಯಧಾರಗಳು ಸಿಗದೆ ಮಾತನಾಡಲು ಸಾಧ್ಯವಿಲ್ಲ ಎಂದು ಕಳೆದ ವರ್ಷ ಸಂಸತ್ತಿನಲ್ಲಿ ಹೇಳಿದ್ದರು.
ಮೃತರು ಪಂಜಾಬ್ ರಾಜ್ಯದವರು. ಇವೆರಲ್ಲಾ ಕೆಲಸದ ನಿಮಿತ್ತ ಮೊಸೂಲ್ಗೆ ತೆರಳಿದ್ದರು. ಈ ವೇಳೆ ಅವರನ್ನು ಒತ್ತೆಯಾಳಾಗಿ ಇರಿಸಿಕೊಂಡು ಹತ್ಯೆಗೈಯ್ಯಲಾಗಿದೆ ಎಂದು ತಿಳಿದು ಬಂದಿದೆ.