ಅವಳಿ ನಗರ ಸಂಪರ್ಕಿಸುವ ಮುಖ್ಯ ರಸ್ತೆ (ಹಳೇ ಪಿ.ಬಿ. ರಸ್ತೆ)ಯನ್ನು ಬಿಆರ್ಟಿಎಸ್ ಮೇಲ್ವಿಚಾರಣೆಯಲ್ಲಿ ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮವು (ಕೆಆರ್ಡಿಸಿಎಲ್) ಡಾಂಬರೀಕರಣ ಮಾಡುತ್ತಿದೆ. ವಿದ್ಯಾನಗರ, ಹೊಸೂರು, ಉಣಕಲ್ ಮುಂತಾದ ಬಡಾವಣೆಗಳನ್ನು ಸಂಪರ್ಕಿಸುವ ರಸ್ತೆಗಳನ್ನು ಕಾಮಗಾರಿ ಸಂದರ್ಭದಲ್ಲಿ ಅಗೆಯಲಾಗಿದೆ. ಅವುಗಳನ್ನು ಸರಿಪಡಿಸದ್ದರಿಂದ ಜನರು ಪರದಾಡುವಂತಾಗಿದೆ.