ಇಲ್ಲಿ ಪ್ರೇಮಿಗಳಿಬ್ಬರೂ ಒಂದೇ ಸಮುದಾಯದಕ್ಕೆ ಸೇರಿದವರಾದರೂ ಕೂಡ ಹುಡುಗಿ ಮನೆಯವರು ಹುಡುಗನನ್ನು ಒಪ್ಪದೇ ಇರಲು ಕಾರಣ ಆತ ಅಂಗವಿಕಲ ಎಂಬ ವಿಚಾರ. ಆದರೆ, ಕೊನೆಗೂ ಪ್ರೀತಿಗೆ ಸೋಲಾಗಲಿಲ್ಲ. ಅಂಗವಿಕಲ ಎನ್ನುವ ಕಾರಣಕ್ಕಾಗಿ ವಧುವಿನ ಪೋಷಕರಿಂದ ನಿರಾಕರಣೆಯಾದ ಪ್ರೇಮಕ್ಕೆ ಸೋಮವಾರ ಕುಂದಾಪುರದ ಮಹಿಳಾ ಸಾಂತ್ತ್ವನ ಕೇಂದ್ರದವರು ಮುಹೂರ್ತ ನಿಶ್ಚಯಿಸುವ ಮೂಲಕ ಮದುಮಕ್ಕಳ ಸಪ್ತಪದಿಗೆ ಸಾಕ್ಷಿಯಾದರು.