ನವದೆಹಲಿ: ತಮಿಳು ಚಿತ್ರರಂಗದ ಸಂಗೀತ ನಿರ್ದೇಶಕ ಇಳಯರಾಜ, ಕಲೆ–ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಕರ್ನಾಟಕದ ರುದ್ರಪಟ್ಟಣಂ ತ್ಯಾಗರಾಜನ್ ಹಾಗೂ ತಾರಾನಾಥನ್ ಸೇರಿದಂತೆ ಒಟ್ಟು 85 ಮಂದಿಗೆ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಪದ್ಮ ಪುರಸ್ಕಾರ ಪ್ರದಾನ ಮಾಡಿದರು.
ಈ ಪೈಕಿ ಮೂವರಿಗೆ ಪದ್ಮವಿಭೂಷಣ, 9 ಜನರಿಗೆ ಪದ್ಮಭೂಷಣ ಹಾಗೂ 73 ಜನ ಸಾಧಕರಿಗೆ ಪದ್ಮಶ್ರೀ ಗೌರವ ದೊರೆತಿದೆ.
ಮಂಗಳವಾರ ಸಂಜೆ ನಡೆದ ಪದ್ಮ ಪುರಸ್ಕಾರ ಪ್ರದಾನ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು, ಗೃಹ ಸಚಿವ ರಾಜನಾಥ್ ಸಿಂಗ್, ಲೋಕಸಭೆಯ ಸ್ಪೀಕರ್ ಸುಮಿತ್ರಾ ಮಹಾಜನ್, ಎನ್ಸಿಪಿ ವರಿಷ್ಠ ಶರದ್ ಪವಾರ್ ಸೇರಿದಂತೆ ಅನೇಕ ಗಣ್ಯರು ಮತ್ತು ಕೇಂದ್ರ ಸಚಿವರು ಹಾಜರಿದ್ದರು.
Watch LIVE as President Kovind presents Padma Awards at 2018 Civil Investiture Ceremony at Rashtrapati Bhavan https://t.co/UnOhFcBvG1