‘ತರಬೇತಿ ಶುಶ್ರೂಷಕರು, ಮತ್ತು ತರಬೇತಿ ಅರೆ ವೈದ್ಯಕೀಯ ಸಿಬ್ಬಂದಿಯನ್ನು ಅವರ ಅರ್ಹತೆ ಪರಿಶೀಲಿಸದೇ ಈ ಹಿಂದೆ ತಾತ್ಕಾಲಿಕವಾಗಿ ನೇಮಕ ಮಾಡಿಕೊಳ್ಳಲಾಗಿದೆ. ಗುಣಾತ್ಮಕ ಚಿಕಿತ್ಸೆ ನೀಡಲು ಅವಶ್ಯವಿರುವ ತಾಂತ್ರಿಕ ಕೌಶಲ ಈ ಸಿಬ್ಬಂದಿಗೆ ಇಲ್ಲ. ಅಲ್ಲದೆ, ವೃಂದ ಮತ್ತು ನೇಮಕಾತಿ ನಿಯಮದಡಿ ನೇಮಕವಾಗಿಲ್ಲ. ಶುಶ್ರೂಷಕ ಮತ್ತು ಅರೆ ವೈದ್ಯಕೀಯ ಸಿಬ್ಬಂದಿಯ ಅರ್ಹತೆ ಪರಿಶೀಲಿಸಿ, ರಾಜ್ಯ ಅರೆ ವೈದ್ಯಕೀಯ ಮಂಡಳಿಯಿಂದ ತಾತ್ಕಾಲಿಕ ನೇಮಕ ಮಾಡಿಕೊಳ್ಳಲು ನಿರ್ಧರಿಸಲಾಗಿದೆ’ ಎಂದು ಆಸ್ಪತ್ರೆ ನಿರ್ದೇಶಕ ಡಾ.ಕೆ.ಬಿ.ಲಿಂಗೇಗೌಡ ಪ್ರತಿಕ್ರಿಯಿಸಿದರು.