‘ವಿದೇಶಿ ಅಭ್ಯಾಸ ಹಾಗೂ ವಿಚಾರ ವಿನಿಮಯ ಕಾರ್ಯಕ್ರಮದಡಿ ಮಂಗಳೂರಿಗೆ ಬಂದ ಈ ಮೂವರು ವಿದ್ಯಾರ್ಥಿಗಳು ಶಿಕ್ಷಣದ ಜತೆಗೆ ಪಠ್ಯೇತರ ಚಟುವಟಿಕೆಯಾಗಿ ಕಲಾ ಚಿತ್ರ ರಚಿಸುವ ವಿಭಾಗವನ್ನು ಆಯ್ಕೆ ಮಾಡಿಕೊಂಡರು. ಕಳೆದ 2 ತಿಂಗಳ ಅವಧಿಯಲ್ಲಿ ಮೈಸೂರು ಸಾಂಪ್ರದಾಯಿಕ, ಮೊಘಲ್, ರಾಜಸ್ಥಾನ್, ವಾರ್ಲಿ ಕಲಾಪ್ರಕಾರಗಳನ್ನು ಕಲಿತಿದ್ದಾರೆ. ತಮ್ಮ ದೇಶದಲ್ಲಿಯೂ ಇದನ್ನು ಮುಂದುವರಿಸಲು ಆಸಕ್ತಿ ಹೊಂದಿದ್ದಾರೆ’ ಎಂದು ಚಿತ್ರಕಲಾ ಶಿಕ್ಷಕ ಜಾನ್ ಚಂದ್ರನ್ ಅವರು ಮಾಹಿತಿ ನೀಡಿದರು.