ಶೇ 85ರಷ್ಟು ಜನರು ಕೃಷಿಕರು. ಆದರೆ, ವ್ಯವಸಾಯಕ್ಕೆ ಪೂರಕವಾದ ನೀರಾವರಿ ಸೌಲಭಗಳಿಲ್ಲ. 1.82 ಟಿಎಂಸಿ ಅಡಿ ನೀರು ಸಂಗ್ರಹ ಸಾಮರ್ಥ್ಯದ ಅಂಜನಾಪುರ ಹಾಗೂ 0.72 ಟಿಎಂಸಿ ಅಡಿ ಸಂಗ್ರಹ ಸಾಮರ್ಥ್ಯದ ಅಂಬಳಿಗೊಳ್ಳ ಜಲಾಶಯ ಹೊರತುಪಡಿಸಿದರೆ. ಹೊಸ ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ಕ್ರಮ ಕೈಗೊಂಡಿಲ್ಲ. ಇದರಿಂದ ಕ್ಷೇತ್ರದ ಅಭಿವೃದ್ಧಿಗೆ ಭಾರಿ ಹಿನ್ನಡೆಯಾಗಿದೆ. ವ್ಯಾಪಾರ, ಉದ್ಯೋಗದ ಮೇಲೂ ದುಷ್ಪರಿಣಾಮ ಬೀರಿದೆ ಎಂದು ಬೇಸರ ವ್ಯಕ್ತಪಡಿಸಿದರು.