‘2010ರ ಬಿಹಾರ ಚುನಾವಣೆಯಲ್ಲಿ ಬಿಜೆಪಿ– ಜೆಡಿಯು, ಕೇಂಬ್ರಿಜ್ ಅನಲಿಟಿಕಾ ಮತ್ತು ಒಬಿಐನ ಸೇವೆ ಪಡೆದುಕೊಂಡಿವೆ. ಬಿಜೆಪಿ ಎಂಬ ಸುಳ್ಳಿನ ಕಾರ್ಖಾನೆಯು ಇಂದು ಮತ್ತೊಂದು ಸುಳ್ಳನ್ನು ಸೃಷ್ಟಿಸಿದೆ. ಚುನಾವಣೆ ಗೆಲ್ಲಲು ಕಾಂಗ್ರೆಸ್ ಪಕ್ಷವು ಮತದಾರರ ಮಾಹಿತಿಗೆ ಕನ್ನಹಾಕಿದೆ ಎಂದು ಹೇಳಿದೆ’ ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೇವಾಲಾ ಲೇವಡಿ ಮಾಡಿದ್ದಾರೆ.