ಆಯೋಗದಲ್ಲಿ ದಾಖಲಾಗುವ ಶೇ 80 ರಷ್ಟು ಪ್ರಕರಣಗಳಿಗೆ ಮೊಬೈಲ್ಗಳೇ ಕಾರಣವಾಗಿವೆ. ಹೀಗಾಗಿ, ಮೊಬೈಲ್ ಬಳಕೆ ಬಗ್ಗೆ ಯುವತಿಯರು ಎಚ್ಚರವಹಿಸಬೇಕು. ನಗರದಲ್ಲಿ ದಾಖಲಾದ ಶೇ 80ರಷ್ಟು ಪ್ರಕರಣಗಳು ಸಾಫ್ಟ್ವೇರ್ ಎಂಜಿನಿಯರ್ಗಳದ್ದಾಗಿವೆ. ಸಣ್ಣಸಣ್ಣ ವಿಚಾರಗಳಿಗೆ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸುತ್ತಿದ್ದಾರೆ. ವಿದ್ಯಾವಂತರಲ್ಲೇ ನೈತಿಕತೆ ಕುಸಿಯುತ್ತಿದೆ ಎಂಬುದಕ್ಕೆ ಇದು ಸಾಕ್ಷಿ ಎಂದು ಮಾಹಿತಿ ನೀಡಿದರು.