‘ಕೆಲ ಕಸಾಯಿಖಾನೆ ಮಾಲೀಕರು ರೋಗಗ್ರಸ್ಥ ಪ್ರಾಣಿಗಳನ್ನು ವಧೆ ಮಾಡಿ, ಮಾಂಸ ಮಾರಾಟ ಮಾಡುತ್ತಿದ್ದಾರೆ. ಇದರಿಂದ ಜನರ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ. ಅಂತಹ ಮಾಂಸ ಸೇವನೆಯಿಂದ ಜ್ವರ, ವಾಂತಿ, ಭೇದಿ, ಕೈಕಾಲು–ಮಂಡಿಗಳಲ್ಲಿ ನೋವು ಕಾಣಿಸಿಕೊಂಡು, ಪ್ರತಿನಿತ್ಯ ಆಸ್ಪತ್ರೆಗಳಿಗೆ ತೆರಳಿ ಚಿಕಿತ್ಸೆ ಪಡೆಯುವಂತಾಗಿದೆ’ ಎಂದು ಸ್ಥಳೀಯ ನಿವಾಸಿ ಚನ್ನರಾಯಪ್ಪ ತಿಳಿಸಿದರು.