‘ತಮಿಳುನಾಡು ತಂಡಕ್ಕೆ ಹೆಚ್ಚು ಕಾಲ ಕಾರ್ತಿಕ್ ಅವರು ನಾಯಕರಾಗಿರಲಿಲ್ಲ. ಆದರೆ ಅವರು ಕೆಕೆಆರ್ ತಂಡವನ್ನು ಮುನ್ನಡೆಸಲು ಅಸಮರ್ಥರೆಂದು ಹೇಳಲಾಗುವುದಿಲ್ಲ. ಅವರಲ್ಲಿ ನಾಯಕತ್ವದ ಗುಣಗಳು ಇವೆ. ಕಾರ್ತಿಕ್ ನೇತೃತ್ವದಲ್ಲಿ ನಮ್ಮ ತಂಡವು ಉತ್ತಮ ಸಾಧನೆ ಮಾಡುವುದು ಖಚಿತ’ ಎಂದು ಕರ್ನಾಟಕ ಕ್ರಿಕೆಟ್ ತಂಡದ ನಾಯಕರೂ ಆಗಿರುವ ವಿನಯ್ ಹೇಳಿದ್ದಾರೆ.