‘ಹುನಗುಂದ ತಹಶೀಲ್ದಾರ್ ಕೊಟ್ಟಿರುವ ಪ್ರಮಾಣಪತ್ರ ತೋರಿಸಿದರೂ ಇಲ್ಲಿಯ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಹುನಗುಂದ ತಾಲ್ಲೂಕು ಬಾಗಲಕೋಟೆ ಜಿಲ್ಲೆಯ ಹೊರತಾಗಿದೆಯೇ ಎಂದು ಪ್ರಶ್ನಿಸಿದ ಡಾ.ಲೋಕೇಶ್, ಪ್ರಮಾಣಪತ್ರ ಕೇಳಿದರೆ ಕ್ರಿಮಿನಲ್ ಕೇಸ್ ಆಗಲಿದೆ ಎಂದು ಸುಮ್ಮನೆ ನಮ್ಮನ್ನು ಹೆದರಿಸುತ್ತಿದ್ದಾರೆ. ಸಂವಿಧಾನ ಬದ್ಧವಾಗಿ ನಮಗಿರುವ ಅವಕಾಶಗಳನ್ನು ಕಿತ್ತುಕೊಳ್ಳಲಾಗುತ್ತಿದೆ ಎಂದು ಆರೋಪಿಸಿದರು.