ಕಳೆದ ವರ್ಷ ಕಾಳುಮೆಣಸಿನ ಧಾರಣೆ ಕುಸಿದಾಗ ಕನಿಷ್ಠ ಆಮದು ದರವನ್ನು ₹ 500ಕ್ಕೆ ನಿಗದಿಗೊಳಿಸಿತ್ತು. ಆದರೂ, ವಾಮಮಾರ್ಗದಲ್ಲಿ ಕಳಪೆ ಗುಣಮಟ್ಟದ ಮೆಣಸು ವಿದೇಶದಿಂದ ರಾಷ್ಟ್ರದ ಒಳಕ್ಕೆ ಬರುತ್ತಿತ್ತು. ಈಗ ಅದನ್ನೂ ತಡೆಯಲು ಕೇಂದ್ರ ಸರ್ಕಾರವು ಮುಂದಾಗಿದೆ. ಇದೇ 22ರಂದು ಹೊಸ ಆದೇಶ ಹೊರಡಿಸಿದೆ ಎಂದು ಕಾಳುಮೆಣಸು ಸಮನ್ವಯ ಸಮಿತಿ ಸಂಚಾಲಕ ಕೊಂಕೋಡಿ ಪದ್ಮನಾಭ ಹಾಗೂ ಸಂಯೋಜಕ ಕೆ.ಕೆ. ವಿಶ್ವನಾಥ್ ತಿಳಿಸಿದ್ದಾರೆ.