ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡಲು ಕೇಂದ್ರ ನಿರಾಕರಿಸಿದ ಬಳಿಕ ಎನ್ಡಿಎ ಮೈತ್ರಿ ಕೂಟದಿಂದ ಹೊರಬರಲು ನಾಯ್ಡು ನಿರ್ಧಸಿದ್ದರು. ಈ ಕುರಿತು ಅಮಿತ್ ಶಾ 9 ಪುಟಗಳ ಪತ್ರ ಬರೆದಿದ್ದು, ನಾಯ್ಡು ನಿರ್ಧಾರವನ್ನು ‘ಏಕಪಕ್ಷೀಯ ಮತ್ತು ದುರದೃಷ್ಟಕರ’ ಎಂದು ಉಲ್ಲೇಖಿಸಿದ್ದರು. ಇದಕ್ಕೆ ಪ್ರತಿಯಾಗಿ ನಾಯ್ಡು, ‘ಆಂಧ್ರಪ್ರದೇಶದ ಜನರ ನಿರೀಕ್ಷೆಗಳಿಗೆ ಬಿಜೆಪಿ ಸ್ಪಂದಿಸುತ್ತಿಲ್ಲ. ಶಾ ಮಾತು ‘ಸುಳ್ಳು ಮತ್ತು ಆಧಾರ ರಹಿತ’ ಎಂದು ಆರೋಪಿಸಿದ್ದಾರೆ.