ಮುಂಬೈ: ಹೆಲಿಕಾಪ್ಟರ್ಗಳ ಕಾರ್ಯ ನಿರ್ವಹಣೆ ಮಾಡುತ್ತಿರುವ ಅಖಿಲ ಭಾರತ ನಾಗರಿಕ ವಿಮಾನಯಾನ ಉದ್ಯೋಗಿಗಳ ಒಕ್ಕೂಟವು ಪವನ್ಹನ್ಸ್ ಹೆಲಿಕಾಪ್ಟರ್ಗಳ ಮಾರಾಟವನ್ನು ವಿರೋಧಿಸಿದೆ.
ಈ ಬಗ್ಗೆ ಒಕ್ಕೂಟವು ಪ್ರಧಾನಿಗೆ ಪತ್ರ ಬರೆದಿದೆ. ಕಳೆದ ವಾರ ನಾಗರಿಕ ವಿಮಾನಯಾನ ಸಚಿವ ಸುರೇಶ್ ಪ್ರಭು ಅವರನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿತ್ತು. ಲಾಭದಲ್ಲಿರುವ ಉದ್ಯಮವನ್ನು ಖಾಸಗಿಯವರಿಗೆ ಮಾರಾಟ ಮಾಡುವ ಸರ್ಕಾರದ ಯತ್ನವನ್ನು ವಿರೋಧಿಸಿತ್ತು.