ವೇದಿಕೆಯ ಪದಾಧಿಕಾರಿಗಳಾದ ನಂಜುಂಡಯ್ಯ, ರಂಗೇಗೌಡ, ಚಂದ್ರಣ್ಣ, ರಮೇಶ್ ಬಾಬು, ಉಮೇಶ್, ಸೀನಪ್ಪ. ಡಿ.ಕೃಷ್ಣ, ಉಮೇಶ್, ಆಂಜನೇಯ ರೆಡ್ಡಿ ಸಂಘಟಿತರಾಗಿ ರೈಲಿಗೆ ಬಲೂನು, ತಳೀರುತೋರಣಗಳಿಂದ ಸಿಂಗರಿಸಿ, ಚಾಲಕ ಮತ್ತು ರೈಲ್ವೆ ಸ್ಟೇಷನ್ ಮಾಸ್ಟರ್ ಉಮೇಶ್ ಅವರನ್ನು ಅಭಿನಂದಿಸಿದರು. ನಂತರ ಪ್ರಯಾಣಿಕರಿಗೆ ಸಿಹಿ ವಿತರಿಸಿದರು.