ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆರೆಗಳ ಹೂಳು ತೆಗೆಸುತ್ತೇನೆ

Last Updated 26 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ರಾಜ್ಯದ ಎಲ್ಲಾ ಕೆರೆಗಳಲ್ಲಿನ ಹೂಳನ್ನು ತೆಗೆಸುತ್ತೇನೆ. ಎಲ್ಲಾ ಖಾಸಗಿ ಶಾಲಾ ಕಾಲೇಜುಗಳನ್ನು, ಮಾದರಿ ಸರ್ಕಾರಿ ಶಾಲೆಗಳಾಗಿ ಪರಿವರ್ತಿಸಿ ಎಲ್ಲರಿಗೂ ಶುಲ್ಕರಹಿತ, ವಿದ್ಯಾಭ್ಯಾಸ ದೊರಕಿಸುತ್ತೇನೆ. ಒಂದಕ್ಕಿಂತ ಹೆಚ್ಚಿನ ನಿವೇಶನ/ಮನೆ ಹೊಂದಿರುವವರಿಂದ, ಅಂತಹ ಆಸ್ತಿಗಳನ್ನು ವಶಕ್ಕೆ ಪಡೆದು ಎಲ್ಲರಿಗೂ ಸೂರು ಕಲ್ಪಿಸುತ್ತೇನೆ.

ಕುಟುಂಬಕ್ಕೆ ಎರಡೇ ಮಕ್ಕಳು, ಅದರಲ್ಲಿ ಒಬ್ಬರು ಕಡ್ಡಾಯವಾಗಿ ರಾಷ್ಟ್ರದ ಸೇನೆಯಲ್ಲಿರಬೇಕೆಂಬ ಕಾನೂನನ್ನು ಜಾರಿಗೆ ತರುತ್ತೇನೆ. ಅರ್ಜಿಗಳಲ್ಲಿ ಜಾತಿ, ಧರ್ಮದ ವಿವರಗಳನ್ನು ಕೇಳದಂತೆ ಮಾಡುತ್ತೇನೆ. ಬೇಸಾಯವನ್ನು ಕೈಗಾರಿಕೆಯೆಂದು ಪರಿಗಣಿಸಿ, ಯುವಕರಿಗೆ ಎಲ್ಲಾ ಸವಲತ್ತುಗಳನ್ನು ದೊರಕಿಸಿಕೊಡುತ್ತೇನೆ. ನನ್ನ ಯೋಜನೆಗಳನ್ನು ಯಶಸ್ವಿಯಾಗಿ ಕಾರ್ಯರೂಪಕ್ಕೆ ತರಲು ಪೂರಕವಾಗಿ, ಪೊಲೀಸ್ ವ್ಯವಸ್ಥೆಯನ್ನು ಬಲಗೊಳಿಸಿ ಭ್ರಷ್ಟಾಚಾರ ಮುಕ್ತ ಆಡಳಿತಕ್ಕೆ ಬಧ್ಧನಾಗಿರುತ್ತೇನೆ.

→ ವಿ.ಗುರುದತ್ತ, ರಾಮಕೃಷ್ಣನಗರ, ಮೈಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT