ಸುದ್ದಿಗಾರರೊಂದಿಗೆ ಮಾತನಾಡಿ, ‘ಕುರಿ ಲೆಕ್ಕ ಹಾಕಲೂ ಗೊತ್ತಿಲ್ಲದವರನ್ನು ದೇವೇಗೌಡರು ಹಣಕಾಸು ಸಚಿವರನ್ನಾಗಿ ಮಾಡಿದರು. ದನ ಮೇಯಿಸುತ್ತಿದ್ದವರನ್ನು ಉಪಮುಖ್ಯಮಂತ್ರಿಯನ್ನಾಗಿ ಮಾಡಿದರು ಎಂದು ಆಗ ಜನ ಮಾತನಾಡಿಕೊಂಡಿದ್ದರು. ಪಿ.ಜಿ.ಆರ್.ಸಿಂಧ್ಯ, ಎಂ.ಪಿ. ಪ್ರಕಾಶ್, ಸಿ.ಬೈರೇಗೌಡ ಅಂತಹವರನ್ನು ಬಿಟ್ಟು ಸಿದ್ದರಾಮಯ್ಯಗೆ ಅವಕಾಶ ನೀಡಿದ್ದರು’ ಎಂದರು.