‘ಪ್ರಸ್ತುತ ಬೇಸಿಗೆಯಲ್ಲಿ ಮೇವಿನ ಕೊರತೆ ಇರುವುದರಿಂದ ರೈತರು ಮೇವನ್ನು ಗೋಶಾಲೆಗೆ ನೀಡಿದರೆ ಸ್ವೀಕಾರ ಮಾಡಲಾಗುವುದು. ಅಲ್ಲದೆ ದಾನಿಗಳು ಗೋ ಸಂರಕ್ಷಣೆಗಾಗಿ ಧನ ಸಹಾಯ ನೀಡಬಹುದು. ಸ್ವಯಂ ಸೇವಾ ಸಂಸ್ಥೆಗಳು ಮೇವು, ಧನ ಸಹಾಯ ಅಥವಾ ಗೋ ಶಾಲೆಯಲ್ಲಿ ಕರ ಸೇವೆ ಮಾಡಲು ಅಪೇಕ್ಷೆ ಪಟ್ಟರೆ ಸ್ವಾಗತಿಸಲಾಗುವುದು. ಸರ್ಕಾರವು ಮಠದ ಗೋಶಾಲೆಗೆ ಅನುದಾನ ನೀಡಿದರೆ ಅದನ್ನು ಸ್ವೀಕಾರ ಮಾಡುತ್ತೇವೆ. ಕರುಣಾಮಯಿ ಗೋವುಗಳಿಗೆ ದೊಡ್ಡ ಗೋಶಾಲೆ ನಿರ್ಮಾಣ ಮಾಡಬೇಕಾಗಿದೆ’ ಎಂದರು.