ಸ್ವಾಯತ್ತ ಸ್ಥಾನಮಾನ ನೀಡಿರುವುದರಿಂದ ಹೊಸ ಕೋರ್ಸುಗಳ ಆರಂಭ, ಹೊಸ ಪಠ್ಯಕ್ರಮ ರೂಪಿಸಲು ಯುಜಿಸಿ ಆಣತಿಗೆ ಕಾಯದೆ ವಿ.ವಿಯು ಸ್ವಂತ ನಿರ್ಧಾರ ಕೈಗೊಳ್ಳುವ ಸ್ವಾತಂತ್ರ್ಯ ಹೊಂದಿದೆ. ಪ್ರೊ.ಸಿ.ಬಸವರಾಜು ಅವರು ಪ್ರಭಾರಿ ಕುಲಪತಿ ಆಗಿರುವ ಸಮಯದಲ್ಲೇ ಸ್ವಾಯತ್ತ ಸ್ಥಾನಮಾನ ಸಿಕ್ಕಿರುವುದು ಶ್ಲಾಘನೀಯ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.