ಸಾವಿರಾರು ವರ್ಷಗಳಿಂದ ನಮ್ಮ ಹಿರಿಯರು ಕಂಡುಕೊಂಡ ಅನುಭವಗಳು, ಪುರಾಣ, ವ್ಯಾಕರಣ, ಕಾವ್ಯ, ಗಣಿತ, ಆಯುರ್ವೇದ, ಪಾಕಶಾಸ್ತ್ರ, ಗಜಶಾಸ್ತ್ರ, ಕೂಪಶಾಸ್ತ್ರ ಮೊದಲಾದವುಗಳನ್ನು ತಾಳೆಗರಿ ಮತ್ತು ಕಾಗದದ ಹಸ್ತಪ್ರತಿಗಳಲ್ಲಿ ಬರೆದಿಟ್ಟಿದ್ದಾರೆ. ಅವುಗಳು ಜ್ಞಾನದ ಆಕರವಾಗಿದ್ದು, ಅವುಗಳ ಸಂರಕ್ಷಣೆ ಮಾಡುವ ಉದ್ದೇಶವನ್ನು ಈ ಯೋಜನೆ ಹೊಂದಿದೆ.