‘ಎಂಇಎಸ್ ಅಭ್ಯರ್ಥಿಗಳ ಪರವಾಗಿ ಫಡಣವೀಸ್ ಪ್ರಚಾರ ನಡೆಸಬೇಕು. ಗಡಿ ವಿಷಯ ಬಂದಾಗ ಕಾಂಗ್ರೆಸ್, ಬಿಜೆಪಿ ತಮ್ಮದೇ ನಿಲುವು ವ್ಯಕ್ತಪಡಿಸುತ್ತವೆ. ಆದರೆ, ಶಿವಸೇನೆ ಯಾವಾಗಲೂ ಮರಾಠಿ ಭಾಷಿಕರ ಪರವಾಗಿ ನಿಲ್ಲುತ್ತದೆ’ ಎಂದರು. ‘ಬಾಳ ಠಾಕ್ರೆ ಅವರ ಕಾಲದಿಂದಲೂ ಶಿವಸೇನೆ ಮರಾಠಿ ಭಾಷಿಕರ ಪರವಾಗಿ ನಿಂತಿದೆ. ಇಲ್ಲಿನ ಮರಾಠಿಗರು ನೀಡಿದ ಪ್ರತಿ ಕರೆಗೂ ಮಹಾರಾಷ್ಟ್ರ ಸ್ಪಂದಿಸಿದೆ ಎಂದು ಅವರು ತಿಳಿಸಿದರು.