ನಗರದ ಕರ್ನಾಟಕ ಕಾಲೇಜಿನಲ್ಲಿ ಬುಧವಾರ ನಡೆದ ಇ–ತ್ಯಾಜ್ಯ ನಿರ್ವಹಣೆ ಕುರಿತ ಮೂರು ದಿನಗಳ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ‘ಹಾಳಾದ ವಿದ್ಯುನ್ಮಾನ ಮತ್ತು ವಿದ್ಯುತ್ ಉಪಕರಣಗಳನ್ನು ಖಾಲಿ ಪ್ರದೇಶದಲ್ಲಿ ಎಸೆಯುವುದರಿಂದ ಮಣ್ಣು, ನೀರು ಮತ್ತು ವಾತಾವರಣ ಕಲುಷಿತಗೊಳ್ಳುತ್ತದೆ. ಅವು ಹೊರಸೂಸುವ ಅರ್ಸನಿಕ್, ಪಾದರಸ, ಲೆಡ್, ನಿಕ್ಕಲ್ ಕ್ಯಾಡ್ಮಿಯಂ ಆಕ್ಸೈಡ್ ಸೆಲೇನಿಯಂನಂಥ ವಿಷಯುಕ್ತ ಅನಿಲಗಳು ಪರಿಸರದ ಮೇಲೆ ದುಷ್ಪರಿಣಾಮ ಬೀರುತ್ತಿವೆ ಎಂದು ಹೇಳಿದರು.