ಒಂದರಿಂದ 10 ವರ್ಷ ಸೇವಾ ಅವಧಿಯೊಳಗೆ ಬರುವ 1,600 ಕಾರ್ಮಿಕರು ವೇಟೇಜ್, ಇನ್ಕ್ರಿಮೆಂಟ್ ಇಲ್ಲದೇ ನಷ್ಟ ಅನುಭವಿಸಬೇಕು. ಕಾರ್ಮಿಕರು ಗಣಿಯಲ್ಲಿ 3 ಸಾವಿರ ಅಡಿ ಕೆಳಗೆ ಸುರಂಗಗಳಲ್ಲಿ ಕೆಲಸ ಮಾಡುತ್ತಾರೆ. ಅವರಿಗೆ ನ್ಯಾಯಯುತವಾಗಿ ಹೆಚ್ಚು ವೇತನ ಸಿಗಬೇಕು ಎಂಬ ಉದ್ದೇಶದಿಂದ ಈ ಹಿಂದೆ ಕಾರ್ಮಿಕ ಸಂಘದ ಆಡಳಿತದ ಚುಕ್ಕಾಣಿ ಹಿಡಿದ ಎಐಟಿಯುಸಿ ಸಂಘಟನೆ 2011ರ ವೇತನ ಒಪ್ಪಂದಲ್ಲಿ ಭೂ ಕೆಳಮೈ ಭತ್ಯೆಯನ್ನು ₹ 406 ದಿಂದ ₹ 1500ಕ್ಕೆ ಹೆಚ್ಚಿಸಿತ್ತು ಎಂದು ಹೇಳಿದಿದ್ದಾರೆ.