ರಾಜು ಕುಟುಂಬದ ಸದಸ್ಯರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುವ ವೇಳೆ ಮಧ್ಯಪ್ರವೇಶ ಮಾಡಿದ ಬಿಜೆಪಿ ಮುಖಂಡ ಮೈ.ಕಾ.ಪ್ರೇಮಕುಮಾರ್, ‘ಬಿಜೆಪಿ ರಾಜ್ಯ ಘಟಕದ ವತಿಯಿಂದ ₹ 5 ಲಕ್ಷ ಪರಿಹಾರ ನೀಡುವಂತೆ ಬಿ.ಎಸ್.ಯಡಿಯೂರಪ್ಪ ಅವರಿಗೆ ಶಾ ಸೂಚನೆ ನೀಡಿದ್ದು ನಿಜ. ಸ್ಥಳದಲ್ಲಿ ಹಣ ಅಥವಾ ಚೆಕ್ ವಿತರಣೆ ಮಾಡಿಲ್ಲ’ ಎಂದರು.