ಮಂಗಳೂರು: ಮೈತ್ರಿ ಸರ್ಕಾರದಲ್ಲಿ ಕರಾವಳಿ ಭಾಗದ ಏಕೈಕ ಪ್ರತಿನಿಧಿ ಎನಿಸಿಕೊಂಡಿರುವ ಯು.ಟಿ. ಖಾದರ್ ಈಗ ಜಿಲ್ಲಾ ಉಸ್ತುವಾರಿ ಸಚಿವರೂ ಹೌದು. ಹಿಂದಿನ ಸರ್ಕಾರದಲ್ಲಿ ಸಚಿವರಾಗಿದ್ದಾಗ, ಕಾರ್ಯಕ್ರಮಗಳಿಗೆ 10–15 ನಿಮಿಷ ತಡವಾಗಿ ಬರುತ್ತಿದ್ದ ಅವರು, ಇದೀಗ ಅರ್ಧಗಂಟೆಗೂ ಹೆಚ್ಚು ಸಭಿಕರನ್ನು ಕಾಯಿಸದೇ ಬಿಟ್ಟಿಲ್ಲ.