ತರೀಕೆರೆ : ತಾಲ್ಲೂಕಿನ ಲಿಂಗದಹಳ್ಳಿ ಹೋಬಳಿಯ ಗುಳ್ಳದಮನೆ, ತ್ಯಾಗದಬಾವಿ ಪ್ರದೇಶಗಳಲ್ಲಿ ಶುಕ್ರವಾರ ಕಾಡಾನೆಯೊಂದು ಅಡಿಕೆ ತೋಟಗಳಿಗೆ ನುಗ್ಗಿ ದಾಂಧಲೆ ನಡೆಸಿದೆ. ಗ್ರಾಮದ ರೈತರಾದ ವಸಂತಕುಮಾರ್, ಸೋಮಶೇಖರಪ್ಪ ಹಾಗೂ ಮೂಡ್ಲಗಿರಿಯಪ್ಪ ಎಂಬುವವರ ತೋಟಗಳಲ್ಲಿ ಬೆಳಿಗ್ಗೆ ಸುಮಾರು 7 ಗಂಟೆಗೆ ಪ್ರತ್ಯಕ್ಷವಾದ ಆನೆಯು ಕಾಡಿನಿಂದ ನೀರು ಕುಡಿಯಲು ಬಂದಿರಬಹುದೆಂದು ಅನುಮಾನಿಸಲಾಗಿದೆ.